Wednesday, March 16, 2011

ಜನನುಡಿಗೆ ಶುಭ ಹಾರೈಕೆ

ಗೋವೆಯಲಿ ಕಟ್ಟಿದರು ಕನ್ನಡಿಗರೊಂದು ಗುಡಿ
ಊದಿದರು ಕೊಂಬು ಕಹಳೆ, ಬಾರಿಸಿದರು ದುಡಿ
ಹೊರಡಿಸಿದರು ಹೊನ್ನ ಹೊತ್ತಿಗೆ "ಗೋವಾ ಜನನುಡಿ"
ಹೊರನಾಡಿನಲೂ ಸವಿಯಿರಿ ಕನ್ನಡಿಗರೆ ಈ ಜೇನ್ನುಡಿ
-ನಾ ಹರಿಶ್ಚಂದ್ರ


ತನು ಮನವ ದಣಿಸಿ
ಧನಮದವ ದಹಿಸಿ
ನೀಡಿದೆ ಮರುಜನ್ಮ ದರ್ಪಣಕೆ
ಜ್ಞಾನ ಸಾಗರನ್ನೆ ಹರಿಸಿದೆ
ಪ್ರೀತಿ ವಾತ್ಸಲ್ಯದಿ ಮಿಂದು
ನಾನೆಂತು ನೀಡಲಿ ನಿನಗೆ?

ಗಾತ್ರದಿ ಅಜವು
ಖ್ಯಾತಿಗೆ ಗಜವ
ಚಾಣಕ್ಯ ಛಲ ಹೊತ್ತು
ಜನಕೆ ಸ್ಪಂದನೆಯ ಪಣ ತೊಟ್ಟು
ದಾಪುಗಾಲಿಕ್ಕಿ ನಿಂದೆ
ಎಸೆವ ಹೊಸ್ತಿಲಲಿ ಈ ಎರಡು ವತ್ಸರದಿ

ಚಿಂತನೆಯ ನಡೆಸು ಚಿಂತಿಸಲು ಬೇಡ
ನಲಿವ ನೈದಿಲೆಯ ಮೇಲೆ
ನಡೆವ ಬಾಳು
ನಿನಗಾಗಿ ಕಾದಿದೆ
ಅದಕೆಂದೆ ನಾವಿಂದು ಕೋರುವೆವು
ಸಾವಿರ ಸಾವಿರ ಶುಭಾಶಯ
-ಅಖಿಲಾ ಕುರಂದವಾದ

No comments:

Post a Comment