ಕನ್ನಡಮ್ಮನ ವರ್ಣಮಾಲೆ
ಅಕ್ಷರದಿ ಗಾರುಡಿ ಲೀಲೆ
ನವ್ಯ ತರಂಗಿಣಿಯ ಸೆಲೆ
ಇದು ಕವಿ ಕಲಿಕಬ್ಬಿಗರ ನೆಲೆ
ಸದಾ ಉರುಳದೇ ಅರಳಿರಲಿ ನಾಳೆ
ಮೊಗ್ಗೊಂದು ಹೂವಾಗಿ
ಹೂವೆರದು ಮುತ್ತಾಗಿ
ಚಿನ್ನ ಕನ್ನಡವು ಮೂರು ಲೋಕದಿ
ಬೆಳಗಲಿ ಬೆಳ್ಳಿ ದೀಪವಾಗಿ
ನಾಕು ವೇದಗಳ ಸಾರ ಹೀರಿ
ಆರು ಋತುಗಳಲಿಯೂ ನಮ್ಮ ಭಾಷೆ
ಪಸರಿಸುತಿರಲಿ ಐಸಿರಿಯು ಎಂಟು ದಿಸೆ
ನವ ಭಾವ ರಸಗಳ ಕರ್ನಾಟಕ ನಾಡು
ದಶ ಶತಕ ಇತಿಹಾಸದಿ ಗುಣಗಾನಿಪ
ಬಂಗಾರದ ಬೀಡು.
-ವೆಂಕಟೇಶ ಕುಲಕರ್ಣಿ
No comments:
Post a Comment