ವಸಂತ ಪ್ರಕಾಶ
ಹಳ್ಳಿ ಹಳ್ಳಿಗಳ ಉದ್ದಾರ ಎಂದು
ಭಾಷಣ ಬಿಗಿಯುವ ಜಾಗ ಅದು ದಿಲ್ಲಿ
ಮೂಕ ಪ್ರೇಕ್ಷಕನಾಗಿ ನಿಂತಿರುವುದು ಅದ ಕಂಡು
ಹನಿ ಮಾತ್ರ ತೊಟ್ಟಿಕ್ಕುವ ನಲ್ಲಿ
ಅಂದು ಗಾಂಧಿ ಕಂಡ ಕನಸು
ಹಳ್ಳಿ ಉದ್ದಾರದಿಂದಲೇ ರಾಮ ಆಜ್ಯ
ಕೋಟಿ ಕೋಟಿ ಕೈಯೊಳಗಿದ್ದರೂ ಕಾಸು
ಅಧಿಕಾರದಾಹದವರ ಮುಗಿಯದ ವ್ಯಾಜ್ಯ
ತನ್ನ ಹಿತವ ಮರೆತು ಪರಹಿತವ ಬಯಸಿತು
ಬಾಬುರಾವ್ ಹಜಾರೆಯವರು ಇನ್ನೊಂದು ಗಾಂಧಿ ನಿಜ
ಗಾಂಧಿ ಕನಸನ್ನು ತಲೆ ಮೇಲೆ ಹೊತ್ತು
ರಾಳೆಗಣ ಶಿದ್ದಿಯಿಂದ ಬಿತ್ತಿದರು ಬೀಜ
ಭ್ರಷ್ಟಚಾರ ಓಡಿಸಲು, ಹೆಜ್ಜೆಗೆ ಹೆಜ್ಜೆ ಸೇರಿಸಲು
ಕಟ್ಟಿಕೊಳ್ಳೊಣ ನಾವು ನಮ್ಮ ಕಾಲಿಗೆ ಗೆಜ್ಜೆ
ವಿಶ್ವದುದ್ದಕು ಭಾರತೀಯ ದೀಪ ಪ್ರಜ್ವಲಿಸಲು
ಮಾಡೋಣ ಶಾಂತಿಮಂತ್ರದೀ ಪೂಜೆ
No comments:
Post a Comment