Saturday, April 23, 2011

ಅಣ್ಣಾ ಹಜಾರೆಗೆ ಜೈ

ವಸಂತ ಪ್ರಕಾಶ


ಹಳ್ಳಿ ಹಳ್ಳಿಗಳ ಉದ್ದಾರ ಎಂದು
ಭಾಷಣ ಬಿಗಿಯುವ ಜಾಗ ಅದು ದಿಲ್ಲಿ
ಮೂಕ ಪ್ರೇಕ್ಷಕನಾಗಿ ನಿಂತಿರುವುದು ಅದ ಕಂಡು
ಹನಿ ಮಾತ್ರ ತೊಟ್ಟಿಕ್ಕುವ ನಲ್ಲಿ

ಅಂದು ಗಾಂಧಿ ಕಂಡ ಕನಸು
ಹಳ್ಳಿ ಉದ್ದಾರದಿಂದಲೇ ರಾಮ ಆಜ್ಯ
ಕೋಟಿ ಕೋಟಿ ಕೈಯೊಳಗಿದ್ದರೂ ಕಾಸು
ಅಧಿಕಾರದಾಹದವರ ಮುಗಿಯದ ವ್ಯಾಜ್ಯ

ತನ್ನ ಹಿತವ ಮರೆತು ಪರಹಿತವ ಬಯಸಿತು
ಬಾಬುರಾವ್ ಹಜಾರೆಯವರು ಇನ್ನೊಂದು ಗಾಂಧಿ ನಿಜ
ಗಾಂಧಿ ಕನಸನ್ನು ತಲೆ ಮೇಲೆ ಹೊತ್ತು
ರಾಳೆಗಣ ಶಿದ್ದಿಯಿಂದ ಬಿತ್ತಿದರು ಬೀಜ

ಭ್ರಷ್ಟಚಾರ ಓಡಿಸಲು, ಹೆಜ್ಜೆಗೆ ಹೆಜ್ಜೆ ಸೇರಿಸಲು
ಕಟ್ಟಿಕೊಳ್ಳೊಣ ನಾವು ನಮ್ಮ ಕಾಲಿಗೆ ಗೆಜ್ಜೆ
ವಿಶ್ವದುದ್ದಕು ಭಾರತೀಯ ದೀಪ ಪ್ರಜ್ವಲಿಸಲು
ಮಾಡೋಣ ಶಾಂತಿಮಂತ್ರದೀ ಪೂಜೆ

No comments:

Post a Comment